ಕನ್ನಡ ಉಳಿಸಿ,ಬೆಳಸಿ ಎಂಬುದರ ಪ್ರಾರ್ಥನೆ
Posted date: 20 Sun, Dec 2015 – 09:07:07 AM

 ಸರ್ಕಾರಿ ಕನ್ನಡ ಶಾಲೆ ಹಾಗೂ ಕಾನ್ವೆಂಟ್ ಶಾಲೆಯ ನಡುವಿನ ಸಾಮ್ಯತೆಗಳನ್ನು ತೋರಿಸಿ, ಮಾತೃಭಾಷೆಯನ್ನು ಎಂದಿಗೂ ಮರೆಯದಿರಿ ಎಂಬುದರ ಸಂದೇಶ ಸಾರುವ ಚಿತ್ರ ಪ್ರಾರ್ಥನೆಯಲ್ಲಿ ಅನಂತನಾಗ್, ಪವಿತ್ರಾಲೋಕೇಶ್,ಅಶೋಕ್,ಪ್ರಕಾಶ್‌ರೈ ತಾರಬಳಗದಲ್ಲಿ  ಇದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡಮಿ ವತಿಯಿಂದ ಚಿತ್ರದ ಪ್ರದರ್ಶನದಲ್ಲಿ ಸ್ಟಾರ್ ಕಲಾವಿದರು ಚಿತ್ರವನ್ನು ವೀಕ್ಷಿಸಿ ಈ ರೀತಿ ಹೇಳಿದರು. ಪತ್ರಕರ್ತರಾಗಿದ್ದು ಚಿತ್ರವನ್ನು ನಿರ್ದೇಶನ ಮಾಢುವುದು ಅಷ್ಟು ಸುಲಭವಲ್ಲ. ಅಂತಹ ಕೆಲಸವನ್ನು ಸದಾಶಿವಶಣೈರವರು ನಿರ್ವಹಿಸಿದ್ದಾರೆ. ಒಳ್ಳೆ ಕತೆಯನ್ನು ತೆಗೆದುಕೊಂಡಿದ್ದಾರೆ. ಮುಂದೆ ದೊಡ್ಡ ಮಟ್ಟದ ಚಿತ್ರ ಮಾಡಲಿ ಅಂತ ಶುಭಹಾರೈಸಿದರು ಪ್ರೇಮಾ. ವಿಮರ್ಶೆ ಮಾಡುವುಷ್ಟು ದೊಡ್ಡವನು ನಾನಲ್ಲ. ಸರ್ಕಾರಿ,ಖಾಸಗಿ ಶಾಲೆಯ ವ್ಯತ್ಯಾಸಗಳನ್ನು ಚೆನ್ನಾಗಿ ತೋರಿಸಿದ್ದಾರೆ.ಆಲ್ ದಿ ಬೆಸ್ಟ್ ಅಂತಾರೆ ದರ್ಶನ್.
      ಚಿತ್ರವನ್ನು ನೋಡುವಾಗ ಬಾಲ್ಯದ ನೆನಪು ಬರುತ್ತದೆ. ಎಲ್ಲೂ ಬೋರ್ ಅನಿಸದೆ ಮನರಂಜನೆ ರೀತಿಯಲ್ಲಿ ಮಾಡಿರುವುದು ಎದ್ದು ಕಾಣಿಸುತ್ತದೆ. ಶಣೈರವರು ಕಮರ್ಷಿಯಲ್ ಸಿನಿಮಾ ಮಾಡುವಂತಾಗಲಿ ಎಂದರು ರಚಿತಾರಾಂ. ಇದೇ  ಮಾತನ್ನು ಧ್ವನಿಗೂಡಿಸಿದರು ಹರಿಪ್ರಿಯಾ. ಹರೀಶ್ ನಿರ್ಮಾಪಕರಾಗಿ ಮೊದಲ ಪ್ರಯತ್ನ. ಮೂರು ವರ್ಷದ ಹಿಂದೆ ಸಿದ್ದಗೊಂಡ ಚಿತ್ರವನ್ನು ಬಿಡುವು ಇಲ್ಲದಿದ್ದರೂ ಒಂದು ಮಾತಿನ ಆಹ್ವಾನಕ್ಕೆ ಚಿತ್ರವನ್ನು ನೋಡಲು ಬಂದಿದ್ದಕ್ಕೆ ಎಲ್ಲರಿಗೂ ಥ್ಯಾಂಕ್ಸ್ ಎಂದರು ಹಿರಿಯ ಪತ್ರಕರ್ತ,ನಿರ್ದೇಶಕ ಸದಾಶಿವಶಣೈ.

GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed